ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ಹೆಸರು ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….
Copy and paste this URL into your WordPress site to embed
Copy and paste this code into your site to embed